ಬಿಂದುವಿನಿಂದ ಅನಂತದೆಡೆಗೆ...

"ಸರಸವೇ ಜೀವನ, ವಿರಸವೆ ಮರಣ "

Thursday, March 31, 2016

ವಿನಮ್ರ ಮನವಿ

ಸಾಹಿತ್ಯ  ಪ್ರಿಯರೇ , ಸಹೃದಯ ಗೆಳೆಯರೇ , ನಿಮ್ಮೆಲ್ಲರಿಗೂ ನಿಮ್ಮ ಪ್ರೀತಿಯ ಗೆಳೆಯ ಲಿಂಗೇಶ್ ಹುಣಸೂರು  ಮಾಡುವ ನಮಸ್ಕಾರಗಳು ಹಾಗು ವಿನಮ್ರ ಮನವಿ .

* ನನ್ನ  ಬದುಕಿನ  ಈವರೆವಿಗಿನ ಅನುಭವಗಳು , ಕನಸುಗಳು ,ನೆನಪುಗಳು  ಎಲ್ಲವನ್ನು ಒಟ್ಟುಗೂಡಿಸಿ "ಬಿಂದುವಿನಿಂದ ಅನಂತದೆಡೆಗೆ " ಕವನ ಸಂಕಲ ರೂಪುಗೊಂಡಿದೆ .

* ನಿಮ್ಮಿಂದ ಹೊರತಾದ ನೆನಪುಗಳು , ಕನಸುಗಳು , ಕಲ್ಪನೆಗಳು  ನನ್ನ ಬದುಕಿನಲ್ಲಿ ಯಾವುದೂ  ಇಲ್ಲ . ಹಾಗಾಗೆ ನನ್ನೆಲ್ಲಾ ಗೆಳೆಯರ ಅಧಮ್ಯ ಪ್ರೀತಿಗೆ ಕೃತಿಯನ್ನು  ಸಮರ್ಪಿಸಿದ್ದೇನೆ .

* ಇಲ್ಲಿ ಬಿಟ್ಟು ಹೋದವರ ಬಗೆಗೆ ಕಾಡುವ ನೆನಪುಗಳಿವೆ., ಉಳಿದು ಕೊಂಡವರ ಬಗೆಗೆ ಪ್ರೀತಿ ಇದೆ , ಗೆಳೆಯರ ಬಗೆಗೆ ಕಾಳಜಿ ಇದೆ , ಸಮಾಜದ ಬಗೆಗೆ ಕಳಕಳಿ ಇದೆ , ಪ್ರೀತಿಯ ಪಿಸುಮಾತುಗಳಿವೆ , ಬದುಕಿಗೆ ಸ್ಪೂರ್ತಿಯ ಸಾಲುಗಳಿವೆ , ಸುಂದರ ಕಲ್ಪನೆಗಳಿವೆ , ಕನಸುಗಳ ಚಿತ್ತಾರವಿದೆ ... ಒಟ್ಟಿನಲ್ಲಿ ನೀವು ನಿಮ್ಮನ್ನೊಮ್ಮೆ ಕವಿತೆಗಳ ಕನ್ನಡಿಯಲ್ಲಿ ಅನಾರಣ ಮಾಡಿಕೊಳ್ಳಬಹುದು .

*ನಾಡಿನ ಖ್ಯಾತ ವಿಮರ್ಶಕರಾದ ಡಾ//ಬೈರಮಂಗಲ ರಾಮೇಗೌಡ ಅವರು ಮುನ್ನುಡಿ ಬರೆದಿದ್ದಾರೆ , ಖ್ಯಾತ ಸಾಹಿತಿ ಶ್ರೀ ದ್ವಾರನಕುಂಟೆ  ಪಾತಣ್ಣ ಅವರು ಬೆನ್ನುಡಿ ಬರೆದಿದ್ದಾರೆ .

* ಇವೆಲ್ಲದಕ್ಕೂ ಒಂದು ಬೆಲೆ ಇದೆ  ಅದು ನಿಮ್ಮ ಪ್ರೀತಿ. ನಿಮ್ಮಗಳ ಪ್ರೀತಿಗೆ , ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವೇ ?!ಆದರೂ  ನಮ್ಮ ಮುಂದಿನ ಸಮಾಜಮುಖಿ ಕನಸುಗಳ ಸಾಕಾರಕ್ಕೆ ೧೦೦ ರೂ  ಎಂದು ನಿಗಧಿ ಮಾಡಿದ್ದೇವೆ .


* ಕೃತಿಯಿಂದ ಬರುವ ಹಣದಲ್ಲಿ " ನಾವು ಮತ್ತು ನಮ್ಮೂರು " ಎಂಬ ಪುಸ್ತಕ ಸರಣಿಯನ್ನು ಗೆಳೆಯರೆಲ್ಲಾ ಕೂಡಿ ಪ್ರಾರಂಭಿಸುತ್ತಿದ್ದೇವೆ. ಪುಸ್ತಕಗಳನ್ನು ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಉಚಿತವಾಗಿ ನೀಡಲಾಗುವುದು .

* ರಾಜ್ಯದ ಅಂಧ ವಿಧ್ಯಾರ್ಥಿಗಳ ಸಾಹಿತ್ಯಿಕ ಆಸಕ್ತಿಯನ್ನು ಉತ್ತೇಜಿಸಲು ಕವನ ಸಂಕಲನದ  ಮತ್ತು  ಪ್ರಕಟಗೊಳ್ಳುವ ಉಚಿತ ಪುಸ್ತಕ ಧ್ವನಿ ಪಟ್ಯ   ಮಾಡಿ ಉಚಿತವಾಗಿ ಅಂಧ ಮಕ್ಕಳ ಶಾಲೆಗಳಿಗೆ ಒದಗಿಸಿ , ಸಂವಾದ ಕ್ಕೆ ಅವಕಾಶ ಕಲ್ಪಿಸುವುದು .



* ಮೊದಲಿಗೆ ಕರ್ನಾಟಕ ನಾಡು ನುಡಿ  ಬಗೆಗೆ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ೧೦೦೦ ಮಾಹಿತಿಗಳನ್ನು ಒಳಗೊಂಡ ಪುಸ್ತಕ ಪ್ರಕಟಣೆ .

*ಅತಿ ಹೆಚ್ಚು ಪುಸ್ತಕ ಕೊಂಡು  ಜ್ಞಾನ ದಾಸೋಹ ಕನಸಿನಲ್ಲಿ ಪಾಲ್ಗೊಂಡು , ಅಂಧ ಮಕ್ಕಳ ಸಾಹಿತ್ಯ ಪ್ರೀತಿಗೆ ಉಚಿತ ದ್ವನಿ ಪಟ್ಯ  ಉಡುಗೊರೆ ಕೊಡುವ ಸಹೃದಯರ ಹೆಸರನ್ನು   , ಉಚಿತ ಪುಸ್ತಕ ಹಾಗು ಸಿಡಿ ಯಲ್ಲಿ ಮುದ್ರಿಸಿ , ಅವರ ಸೇವೆಯನ್ನು ನೆನೆಯಲಾಗುವುದು .

* ಪ್ರತಿ ವರ್ಷ ಒಂದು ಪುಸ್ತಕವನ್ನು ಯೋಜನೆ ಯಡಿಯಲಿ  ಪ್ರಕಟಿಸಲಾಗುವುದು 

* ಆತ್ಮಿಯರೇ ಹೆಚ್ಹು ಹೆಚ್ಚು ಪುಸ್ತಕ ಕೊಂಡುಕೊಳ್ಳಿ , ನಿಮ್ಮ ಗೆಳೆಯರಿಗೂ ತಿಳಿಸಿ , ಉಡುಗೊರೆ ನೀಡಿ , ಮೂಲಕ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ನಮ್ಮ ಕನ್ನಡ ಮಕ್ಕಳ ಜ್ಞಾನ ವೃದ್ದಿಸುವ  ನಮ್ಮ ಪುಟ್ಟ ಪ್ರಯತ್ನದಲ್ಲಿ , ನೀವೂ ಪಾಲ್ಗೊಳ್ಳಿ , ಮೂಲಕ ಕನ್ನಡ  ಕೆಲಸ, ಸಮಾಜ ಸೇವೆ ಯಲ್ಲಿ ನಿಮ್ಮದು ಹೆಜ್ಜೆ ಗುರುತಿರಲಿ .

* ನಮ್ಮ ಕನಸುಗಳ ಬಗೆಗೆ ನಿಮ್ಮ ಅಭಿಪ್ರಾಯ , ಸಲಹೆ ಗಳನ್ನು ತಪ್ಪದೇ ತಿಳಿಸಿ .

ಚುಕ್ಕಿ ಗೆಳೆಯರ ಬಳಗದ ಪರವಾಗಿ ,

ನಿಮ್ಮವ
ಲಿಂಗೇಶ್ ಹುಣಸೂರ್
ಮಿಂಚೆ :lingeshkc9@gmail.com
ವೆಬ್ :http://lingeshhunsur.blogspot.in
ನಿಸ್ತಂತು ದೂ :9964438393

ಅಂಚೆ ವಿಳಾಸ : ಲಿಂಗೇಶ್ ಹುಣಸೂರು ,
ಅಂಚೆ ಸಹಾಯಕ , ಎಸ ವಿ ವಿ ಏನ್ ಭವನ ,
ಎಸ .ಬಿ ಎಂ ಪ್ರಧಾನ ಕಚೇರಿ ಎದುರು ,
ಬೆಂಗಳೂರು -೫೬೦೦೦೯

ಅಂಚೆ ಮೂಲಕ ಪ್ರತಿಗೆ ೧೨೦ ರು ಗಳನ್ನೂ -ಎಂ ಮಾಡಿ ಮಾಹಿತಿ ನೀಡಿ .

ಧನ್ಯವಾದಗಳು

ಬಿಂದುವಿನಿಂದ ಅನಂತದೆಡೆಗೆ

ಲಿಂಗೇಶ್ ಹುಣಸೂರ್
ಅಂಚೆ ಸಹಾಯಕ /
ಅಂಚೆ ಜೀವ ವಿಮೆ ಕ್ಷೇತ್ರ ಅಧಿಕಾರಿ
ಕೆ. ಜಿ. ರಸ್ತೆ ಅಂಚೆ ಕಚೇರಿ ,
ಬೆಂಗಳೂರು -೫೬೦೦೯
9964438393
Lingeshkc9@gmail.com
ಶೈಕ್ಷಣಿಕ ಹೆಜ್ಜೆ ಗುರುತುಗಳು
. ಮೈಸೂರು ವಿಶ್ವ ವಿದ್ಯಾನಿಲಯ ದಿಂದ ಎರಡು ಚಿನ್ನದ ಪದಕಗಳೊಂದಿಗೆ  ಸ್ನಾತಕೋತ್ತರ ಅರ್ಥಶಾಸ್ತ್ರ ಪದವಿ .
. ಮೈಸೂರು ರಂಗಾಯಣದಿಂದ ಭಾರತೀಯ ರಂಗ ಶಿಕ್ಷಣ ಕೇಂದ್ರ ದಿಂದ  ಡಿಪ್ಲೋಮಾ ಇನ್ ಥಿಯೇಟರ್ . (Dip in Th)
. ಡಿಪ್ಲೋಮಾ ಇನ್ ಕಂಪ್ಯೂಟರ್ ಏಡುಕೇಶನ್ . (Dip in CS )
. ಅಂಗ್ಲ ಬೆರಳಚ್ಚು ನಲ್ಲಿ ಸೀನಿಯರ್ ಗ್ರೇಡ್ .
. ಕನ್ನಡ ಸಾಹಿತ್ಯ ಪರಿಷತ್ತ್ ನಡೆಸುವ ಕನ್ನಡ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿ .
. ಕರ್ನಾಟಕ ಇತಿಹಾಸ ಅಕಾಡೆಮಿ ನಡೆಸುವ ಇತಿಹಾಸ ಪರೀಕ್ಷೆಯಲ್ಲಿ ಉತ್ತೀರ್ಣ .
. ರಾಷ್ಟೀಯ ಯುವ ಸೇನೆ (NCC ) ಯಲ್ಲಿ  "ಸಿ" ಸರ್ಟಿಫಿಕೇಟ್  ತೇರ್ಗಡೆ .
. ರಾಷ್ಟ್ರೀಯ ಸೇವಾ ಯೋಜನೆ (NSS ) ನಲ್ಲಿ     ಸಕ್ರೀಯ ಸ್ವಯಂ ಸೇವಕ   .
. NSS ಹಾಗು NCC  ವತಿಯಿಂದ  ಹಲವಾರು ರಾಜ್ಯ , ರಾಷ್ಟ್ರ ಮಟ್ಟದ ಶಿಭಿರಗಳಲ್ಲಿ ಭಾಗಿ  .
೧೦ಎರಡು ಬಾರಿ ರಕ್ತದಾನ .
೧೧ಚರ್ಚಸ್ಪರ್ದೆ , ನಾಟಕ  ಗಳಲ್ಲಿ ಭಾಗಿ, ಹಲವಾರು ಕಾರ್ಯಕ್ರಮಗಳ ನಿರೂಪಣೆ
ಬದುಕಿನ ಹಾದಿ .
ಕುಟುಂಬ : ತಂದೆ ಜೆ ಚನ್ನೇಗೌಡ ಪ್ರಾಥಮಿಕ ಶಾಲಾ ಶಿಕ್ಷಕರು . ಭಾಲ್ಯದಲ್ಲಿ ಮಗನಿಗೆ ಶಿಕ್ಷಕರು  . ತಾಯಿ ರಾದಮ್ಮ ಗೃಹಿಣಿ . ಹೆಸರು ಬರೆಯುವಸ್ಟು ಮಾತ್ರ  ಕಲಿಕೆತಮ್ಮ ನಂದೀಶ್  ಧಾರವಾಡದ ಕರ್ನಾಟಕ  ವಿಶ್ವವಿಧ್ಯಾನಿಲಯ ದಲ್ಲಿ ಗಣಿತ ಶಾಸ್ತ್ರ ದಲ್ಲಿ P.Hd  ಮಾಡುತ್ತಿದ್ದಾರೆ . ಪತ್ನಿ  ಲಕ್ಷ್ಮಿ  B.Sc, B.Ed  ಪಧವಿದರೆ . ಶಿವಮೊಗ್ಗ ಊರಿನವರುಇಬ್ಬರು ಮಕ್ಕಳುಹಿರಿಯವ  ಮಲ್ಲೇಶ್ವರಂ ಕೇಂದ್ರೀಯ ವಿದ್ಯಾಲಯ ದಲ್ಲಿ ಮೊದಲನೇ  ತರಗತಿ . ಎರಡನೆಯವನಿಗೆ  ಎರಡೂವರೆ  ವರ್ಷ ವರ್ಷವಾಸ ಬೆಂಗಳೂರಿನಲ್ಲಿ .
ವಿಧ್ಯಾಭ್ಯಾಸ :
ಪ್ರಾಥಮಿಕ ಶಾಲೆ ಕನ್ನಡ ಮಾಧ್ಯಮದಲ್ಲಿ  ಹುಣಸೂರಿನ ಸರ್ಕಾರಿ ಶಾಲೆಯಲ್ಲಿ , ಪ್ರೌಢ ಶಾಲೆ ಕನ್ನಡ ಮಾಧ್ಯಮದಲ್ಲಿ  ಕ್ರೈಸ್ತ ಸಂಸ್ಥೆ  ಯಲ್ಲಿ , ಪದವಿ ಪೂರ್ವ ಮೈಸೂರಿನ ಮರಿಮಲ್ಲಪ್ಪ  ಕಾಲೇಜುಪದವಿ ಮಹಾರಾಜ ಕಾಲೇಜು . ಮೈಸೂರು ವಿಶ್ವ ವಿದ್ಯಾನಿಲಯ ದಿಂದ ಎರಡು ಚಿನ್ನದ ಪದಕಗಳೊಂದಿಗೆ  ಸ್ನಾತಕೋತ್ತರ ಅರ್ಥಶಾಸ್ತ್ರ ಪದವಿ .

ವೃತ್ತಿ :
ಭಾರತೀಯ ಅಂಚೆ ಇಲಾಖೆಯಲ್ಲಿ  ಅಂಚೆ ಸಹಾಯಕ  ಹಾಗು ಅಂಚೆ ಜೀವ ವಿಮೆ ಕ್ಷೇತ್ರ ಅಧಿಕಾರಿಯಾಗಿ . ಬೆಂಗಳೂರಿನ ಕೆಂಪೇಗೌಡ ರಸ್ತೆ ಅಂಚೆ ಕಚೇರಿಯಲ್ಲಿ ಕಾರ್ಯ ನಿರ್ವಹಣೆ
ಭಾರತೀಯ ಅಂಚೆ ನೌಕರರ ಸಂಘ ( Affiliated to  BMS)   ಕರ್ನಾಟಕ ರಾಜ್ಯ ವಲಯ ಸಂಘಟನ ಕಾರ್ಯದರ್ಶಿಬೆಂಗಳೂರು ಪಶ್ಚಿಮ ಅಂಚೆ ವಿಭಾಗ ಅಧ್ಯಕ್ಷ .
ಪ್ರವೃತ್ತಿ :
ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿ , ಸಾಮಾಜಿಕ ಕಳಕಳಿಯ  ಕೆಲಸಗಳಲ್ಲಿ ಭಾಗಿ . ಕನ್ನಡ ನಾಡು -ನುಡಿಯ  ಪರಿಚಾರಕಗೆಳೆಯರನ್ನು ಒಗ್ಗೂಡಿಸಿ "ಚುಕ್ಕಿ ಸಂಸ್ಥೆ" ಎಂಬ NGO ಸ್ಥಾಪನೆ  - ಶಿಕ್ಷಣ , ಮಾಹಿತಿ  ಯುವಶಕ್ತಿ ಪಾಲ್ಗೊಳ್ಳುವಿಕೆ ಮೂಲಕ ಗ್ರಾಮೀಣಾ ಭಿವ್ರುದ್ದಿ ಕನಸು
ಕನ್ನಡ ಬ್ಲಾಗರ್ : http://lingeshhunsur.blogspot.in  ಕನ್ನಡದಲ್ಲಿ ಸ್ಪರ್ದಾತ್ಮಕ  ಪರೀಕ್ಷೆ ಬರೆಯುವವರಿಗೆ ಮಾಹಿತಿ ನೀಡಲು http:kannadaspardayodharu.blogspot.in ಬ್ಲಾಗ್  ರಚನೆಅಂತರ್ಜಾಲ ಮಾಧ್ಯಮಗಳ ಮೂಲಕ ಕನ್ನಡ ಸಂಘಟನೆ , ಮಾಹಿತಿ ನೀಡುವ ಗುಂಪುಗಳ ನಿರ್ವಹಣೆ (whatsapp/Facebook etc).  
 ಹವ್ಯಾಸಿ ಬರಹಗಾರ ನಾಗಿ ಸಾಹಿತ್ಯ ಸಾಹಿತ್ಯ ಸೇವೆ .
 ಸಾಹಿತ್ಯ ಸೇವೆ:
ಪ್ರಸ್ತುತ (೨೦೧೬ ರಿಂದ  )ಬೆಂಗಳೂರು ನಗರ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ ಮಾಹಿತಿ ಸಂಚಾಲಕ ನಾಗಿ ಕಾರ್ಯ ನಿರ್ವಹಣೆ .
ಪ್ರಕಟಿತ ಕೃತಿಗಳು :
ಬಿಂದುವಿನಿಂದ ಅನಂತದೆಡೆಗೆ (ಕವನ ಸಂಕಲನ ೨೦೧೫)


*****